ಅಲ್ಲದೇ, ಪೂರ್ವಭಾವಿ ಸಭೆಗೆ ಮುನ್ನವೇ ಶಾಸಕರು ಹಾಗೂ ತಹಶೀಲ್ದಾರ್ ಅವರು ಪ್ರತ್ಯೇಕವಾಗಿ ತಮ್ಮ ಪರ ಇದ್ದ ದಲಿತ ಮುಖಂಡರ ಸಭೆ ಕರೆದು ಎಲ್ಲಿ ಪೂರ್ವಭಾವಿ ಸಭೆ ನಡೆಸಬೇಕು ಎಂದು ಅಭಿಪ್ರಾಯ ಪಡೆದಿದ್ದರು. ಹಾಗಾಗಿ, ಅಂಬೇಡ್ಕರ್ ಜಯಂತಿ ಪೂರ್ವಭಾವಿ ನಡೆಸುವಲ್ಲಿ ಎರಡು ಗುಂಪುಗಳಾಗಿದ್ದವು. ಆಯಾ ಗುಂಪಿನ ನೇತೃತ್ವವಹಿಸಿದ್ದವರು ಅವರವರು ನಿಗದಿಪಡಿಸಿದ್ದ ಸ್ಥಳದಲ್ಲಿಯೇ ಪೂರ್ವಭಾವಿ ಸಭೆ ನಡೆಸುವುದಾಗಿ ಪಟ್ಟು ಹಿಡಿದಿದ್ದರು. ಅಲ್ಲದೇ, ಎರಡೂ ಗುಂಪುಗಳು ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.