<p><strong>ಮುಳಬಾಗಿಲು:</strong> ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಗುರುವಾರ ಕೇಂದ್ರ ಸರ್ಕಾರದ ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ, ಕೋಮುಲ್ ಹಾಗೂ ಮುಳಬಾಗಿಲು ಶಿಬಿರ ಕಚೇರಿಯ ಸಹಯೋಗದಲ್ಲಿ ತಾಲ್ಲೂಕಿನ ಡೇರಿಗಳಿಗೆ ವಿವಿಧ ಯಂತ್ರೋಪಕರಣ ವಿತರಿಸಲಾಯಿತು.</p>.<p>ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಇತ್ತೀಚೆಗೆ ಕೋಮುಲ್ ಡೇರಿಯಲ್ಲಿ ಹಾಲಿನ ತ್ಯಾಜ್ಯವನ್ನು ಕೋಮುಲ್ ಸಿಬ್ಬಂದಿ ಡೇರಿಯಿಂದ ಹೊರಹಾಕಿದರೆ, ಅದನ್ನು ಕೆಲವರು ತುಪ್ಪ ಚೆಲ್ಲಿ ವ್ಯರ್ಥ ಮಾಡಿದ್ದಾರೆಂದು ಆರೋಪಿಸಿದ್ದರು. ಇದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು.</p>.<p>ಕೋಮುಲ್ ₹ 18 ಕೋಟಿ ನಷ್ಟದಲ್ಲಿತ್ತು. ಅಂತಹ ಡೇರಿಯನ್ನು ₹ 9 ಕೋಟಿ ಲಾಭದತ್ತ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಡೇರಿಯಿಂದ ಐಸ್ ಕ್ರೀಂ, ಪನ್ನೀರ್, ಚೀಸ್ ಹಾಗೂ ಪಶು ಆಹಾರ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.</p>.<p>ರಾಜ್ಯ ಸರ್ಕಾರ ಗ್ಯಾರಂಟಿಗಳಿಂದ ರಾಜ್ಯವನ್ನು ಹಾಳು ಮಾಡುತ್ತಿದೆ. ಭೋವಿ, ವಾಲ್ಮೀಕಿ ನಿಗಮಗಳಲ್ಲಿ ಹಗರಣ ನಡೆಸುತ್ತಿದ್ದರೂ ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಕುಟುಕಿದರು.</p>.<p>ಕಾರ್ಯಕ್ರಮದಲ್ಲಿ ಡೇರಿ ಸಿಬ್ಬಂದಿಗೆ ಜರ್ಕಿನ್ ಹಾಗೂ ಮತ್ತಿತರರ ಸಲಕರಣೆಗಳನ್ನು ವಿತರಿಸಿದರು.</p>.<p>ಬಿ.ವಿ.ಸಾಮೇಗೌಡ, ಬಿ.ವಿ.ಶಾಮೇಗೌಡ, ಎಂ.ಎಸ್.ಶ್ರೀನಿವಾಸ ರೆಡ್ಡಿ, ಕೆ.ಎನ್.ಪ್ರಕಾಶ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ಅಶೋಕ್ ಕುಮಾರ್, ವರದಪ್ಪ, ನರಸಿಂಹಪ್ಪ, ಮುನಿಸ್ವಾಮಿ ಗೌಡ, ಶಂಕರಪ್ಪ, ಬಾಲಕೃಷ್ಣ, ಶ್ರೀನಿವಾಸ್, ಲಕ್ಷ್ಮಿ ಪ್ರಿಯ, ಡಾ.ಕಿರಣ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ನಗರದ ಕೋಮುಲ್ ಶಿಬಿರ ಕಚೇರಿಯಲ್ಲಿ ಗುರುವಾರ ಕೇಂದ್ರ ಸರ್ಕಾರದ ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ, ಕೋಮುಲ್ ಹಾಗೂ ಮುಳಬಾಗಿಲು ಶಿಬಿರ ಕಚೇರಿಯ ಸಹಯೋಗದಲ್ಲಿ ತಾಲ್ಲೂಕಿನ ಡೇರಿಗಳಿಗೆ ವಿವಿಧ ಯಂತ್ರೋಪಕರಣ ವಿತರಿಸಲಾಯಿತು.</p>.<p>ಈ ವೇಳೆ ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಮಾತನಾಡಿ, ಇತ್ತೀಚೆಗೆ ಕೋಮುಲ್ ಡೇರಿಯಲ್ಲಿ ಹಾಲಿನ ತ್ಯಾಜ್ಯವನ್ನು ಕೋಮುಲ್ ಸಿಬ್ಬಂದಿ ಡೇರಿಯಿಂದ ಹೊರಹಾಕಿದರೆ, ಅದನ್ನು ಕೆಲವರು ತುಪ್ಪ ಚೆಲ್ಲಿ ವ್ಯರ್ಥ ಮಾಡಿದ್ದಾರೆಂದು ಆರೋಪಿಸಿದ್ದರು. ಇದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದರು.</p>.<p>ಕೋಮುಲ್ ₹ 18 ಕೋಟಿ ನಷ್ಟದಲ್ಲಿತ್ತು. ಅಂತಹ ಡೇರಿಯನ್ನು ₹ 9 ಕೋಟಿ ಲಾಭದತ್ತ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಡೇರಿಯಿಂದ ಐಸ್ ಕ್ರೀಂ, ಪನ್ನೀರ್, ಚೀಸ್ ಹಾಗೂ ಪಶು ಆಹಾರ ತಯಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.</p>.<p>ರಾಜ್ಯ ಸರ್ಕಾರ ಗ್ಯಾರಂಟಿಗಳಿಂದ ರಾಜ್ಯವನ್ನು ಹಾಳು ಮಾಡುತ್ತಿದೆ. ಭೋವಿ, ವಾಲ್ಮೀಕಿ ನಿಗಮಗಳಲ್ಲಿ ಹಗರಣ ನಡೆಸುತ್ತಿದ್ದರೂ ಮತ್ತೊಬ್ಬರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಕುಟುಕಿದರು.</p>.<p>ಕಾರ್ಯಕ್ರಮದಲ್ಲಿ ಡೇರಿ ಸಿಬ್ಬಂದಿಗೆ ಜರ್ಕಿನ್ ಹಾಗೂ ಮತ್ತಿತರರ ಸಲಕರಣೆಗಳನ್ನು ವಿತರಿಸಿದರು.</p>.<p>ಬಿ.ವಿ.ಸಾಮೇಗೌಡ, ಬಿ.ವಿ.ಶಾಮೇಗೌಡ, ಎಂ.ಎಸ್.ಶ್ರೀನಿವಾಸ ರೆಡ್ಡಿ, ಕೆ.ಎನ್.ಪ್ರಕಾಶ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ಅಶೋಕ್ ಕುಮಾರ್, ವರದಪ್ಪ, ನರಸಿಂಹಪ್ಪ, ಮುನಿಸ್ವಾಮಿ ಗೌಡ, ಶಂಕರಪ್ಪ, ಬಾಲಕೃಷ್ಣ, ಶ್ರೀನಿವಾಸ್, ಲಕ್ಷ್ಮಿ ಪ್ರಿಯ, ಡಾ.ಕಿರಣ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>