ತಾಲ್ಲೂಕಿನ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ 10 ಗಂಟೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಶೋಧ ಕೊನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಇ.ಡಿ ಅಧಿಕಾರಿಗಳು ಮೂರು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೋಚಿಮುಲ್ ನೇಮಕಾತಿ ಬಗ್ಗೆ ಪ್ರಶ್ನೆ ಕೇಳಿದರು. ಏನು ಕೇಳಿದರೂ ಸಹಕಾರ ನೀಡಿದ್ದೇನೆ. ಮಾಲೂರು ತಾಲ್ಲೂಕಿನ ದರಖಾಸ್ತು ಸಮಿತಿ ಬಗ್ಗೆ ಪ್ರಸ್ತಾಪ ಮಾಡಿದರು. ಅದಕ್ಕೂ ವಿವರಣೆ ಕೊಟ್ಟಿದ್ದೇನೆ. ನನ್ನ ವಹಿವಾಟಿನ ಬಗ್ಗೆ ಕೇಳಿದ್ದು, ಮಾಹಿತಿ ನೀಡಿದ್ದೇನೆ’ ಎಂದರು.