ದೇವಾಲಯವನ್ನು ಸಂಪೂರ್ಣವಾಗಿ ಕಲ್ಲುಗಳಿಂದ ರಚಿಸಲಾಗಿದೆ. ಎಲ್ಲಿಯೂ ಕಬ್ಬಿಣ ಬಳಸಿಲ್ಲ. ಅಡಿಪಾಯಕ್ಕೆ ಏಳು ಹಂತದಲ್ಲಿ ಸುಮಾರು 83 ಸಾವಿರ ಟನ್ ಗ್ರಾನೈಟ್ ಬಳಕೆ ಆಗಿದೆ. ಚಿಕ್ಕಬಳ್ಳಾಪುರ, ದೇವನಹಳ್ಳಿ, ಸಾದರಹಳ್ಳಿಯಲ್ಲಿ ಸಿಗುವ ಗ್ರಾನೈಟ್ ಅನ್ನೇ ಬಹುತೇಕ ಬಳಸಲಾಗಿದೆ. ಕೊರತೆಯಾದ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ಕರೀಂನಗರ, ವರಂಗಲ್ಗಳಲ್ಲಿ ಸಿಕ್ಕ ಕಲ್ಲುಗಳನ್ನು ಬಳಸಲಾಗಿದೆ.