ಏನಿದು ಪ್ರಕರಣ?: ತಾಲ್ಲೂಕಿನ ಎಚ್.ಬೈಯಪ್ಪನಹಳ್ಳಿ ಗ್ರಾಮದಲ್ಲಿ 2019ರ ಏಪ್ರಿಲ್ 25ರಂದು ಪವನ್ ಕಲ್ಯಾಣ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬ ದ್ವಿಚಕ್ರ ವಾಹನವನ್ನು ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದು, ಅದನ್ನು ಗೋವರ್ಧನ್ ಮತ್ತು ಚಂದನ್ ಪಂಕ್ಚರ್ ಮಾಡಿದ್ದಾರೆಂದು ಆರೋಪಿಸಿ ಜಗಳ ತೆಗೆದಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ಕಂಬಿ ಹಾಗೂ ದೊಣ್ಣೆಯಿಂದ ಗೋವರ್ಧನ್ ಅವರ ಬಲಗಣ್ಣಿಗೆ ತಿವಿದು ತಲೆಗೆ ಹೊಡೆದು ಕೊಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.