‘ನರ್ಸರಿಯೊಂದರಿಂದ 9 ಸಾವಿರ ಟೊಮೆಟೊ ಸಸಿ (ನಾರು) ತಂದು ಶಿವರಾತ್ರಿ ಮಾರನೇ ದಿನ ನಾಟಿ ಮಾಡಿದ್ದೆವು. ನಂತರದಲ್ಲಿ ಎರಡು ತಿಂಗಳು ಉತ್ತಮವಾಗಿ ಆರೈಕೆ ಮಾಡಿ ಬೆಳೆಸಿದ್ದೆವು. ಹೂವು, ಪಿಂದೆ ಚೆನ್ನಾಗಿ ಬಂದಿತ್ತು. ನಂತರ ಹಣ್ಣು ಕಳಪೆಯಾಗಿದೆ. ನರ್ಸರಿಯವರ ಗಮನಕ್ಕೂ ಈ ವಿಚಾರ ತಂದಿದ್ದೇನೆ. ಸಸಿ ಕಳಪೆಯಾಗಿರುವ ಪರಿಣಾಮ ಗೋಡಂಬಿ ಹಣ್ಣಿನ ರೀತಿಯಲ್ಲಿ ಟೊಮೆಟೊ ಕಾಣಿಸುತ್ತಿವೆ. ಕಳಪೆ ಸಸಿಯೇ ಇದಕ್ಕೆ ಕಾರಣ. ಎರಡು ಎಕರೆ ಟೊಮೆಟೊ ಬೆಳೆ ಬೆಳೆಯಲು ಸುಮಾರು ₹ 4 ಲಕ್ಷ ಖರ್ಚು ಮಾಡಲಾಗಿದೆ. ಈಗ ಸ್ವಲ್ಪವೂ ಆದಾಯ ಇಲ್ಲದೆ ಸಂಪೂರ್ಣ ನಷ್ಟ ಉಂಟಾಗಿದೆ’ ಎಂದು ರೈತ ವೇಣು ಬೇಸರ ವ್ಯಕ್ತಪಡಿಸಿದ್ದಾರೆ.