ಹಿಂದಿ, ಕನ್ನಡ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ನಿರರ್ಗಳವಾಗಿ ಮಾತನಾಡಿ ತೀರ್ಪುಗಾರರ ಮನಗೆದ್ದರು.ದೃಶ್ಯಕಲೆ ಸ್ಪರ್ಧೆಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಯಕ್ಷಗಾನ, ಗ್ರಾಮೀಣ ಜನಪದ ಕಲೆ ಪ್ರದರ್ಶಿಸಿದ್ದು ಕಂಡುಬಂತು. ಬಾಗಲಕೋಟೆ ಜಿಲ್ಲೆಯ ಮಕ್ಕಳಾದ ಪ್ರಾಚಿ ಸೋನಾಮಾಲ್ಕರ್, ಪ್ರೀತಿ, ಭಾಗ್ಯಶ್ರೀ, ಪ್ರಿಯಾಂಕ ಯಕ್ಷಗಾನ ಕಲೆಯನ್ನು ಜೇಡಿ ಮಣ್ಣು, ಚಿತ್ರಕಲೆ ಮತ್ತು ಕೈಕಸುಬಿನ ಕಲೆಯಿಂದ ಅನಾವರಣಗೊಳಿಸಿದರು.