ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ಹಾಗೂ ಅದರ ನಾಯಕರದ್ದು ಮನುವಾದಿ ಸಂಸ್ಕೃತಿ. ಮಹಿಳೆ ಅಧಿಕಾರ ನಡೆಸಲು ಅನರ್ಹಳು ಎಂಬ ದಬ್ಬಾಳಿಕೆಯ ಮನಸ್ಥಿತಿ ಅವರದ್ದು. ನಿಂದನೆ ಬಗ್ಗೆ ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರು ಮಾತನಾಡುತ್ತಿಲ್ಲ. ತಾರಾಕ್ಕ, ಶಶಿಕಲಾ, ಶೋಭಾಕ್ಕ ಎಲ್ಲಿ ಕಳೆದು ಹೋದರೋ ಗೊತ್ತಿಲ್ಲ’ ಎಂದರು.