ಮಾಲೂರು: ಕೆಸರಗೆರೆ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೂ.13 ಲಕ್ಷ ವೆಚ್ಚದ ಉಪ ಆರೋಗ್ಯ ಕೇಂದ್ರಕ್ಕೆ ತಾ.ಪಂ.ಸದಸ್ಯ ಕೆ.ಆರ್.ಗೋಪಾಲ ಗೌಡ ಚಾಲನೆ ನೀಡಿದರು.
ಗಡಿಭಾಗದ ಕೆಸರಗೆರೆ ಬಿಟ್ನಹಳ್ಳಿ, ಅಗ್ರಹಾರ, ಗಂಗಸಂದ್ರ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮದ ಜನತೆಗೆ ಅನು ಕೂಲವಾಗಲಿದೆ ಎಂದು ಗೋಪಾಲ ಗೌಡ ಹೇಳಿದರು.
ಎಪಿಎಂಸಿ ಅಧ್ಯಕ್ಷ ಕೆ.ಆರ್.ಬೀರೇ ಗೌಡ, ಮಾಸ್ತಿ ಗಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಕೃಷ್ಣೇಗೌಡ, ಮುಖಂ ಡರಾದ ಕೆ.ಆರ್.ಆಂಜನೇಯ ಗೌಡ, ಕೆ.ಎಚ್.ಕೃಷ್ಣ ಕುಮಾರ್, ವಿ.ಹನು ಮಪ್ಪ, ಟಿ.ಗೋಪಾಲಪ್ಪ, ಕೆ.ಎ.ರಂಗ ನಾಥ್, ಆಂಜನಪ್ಪ, ಕೆ.ಎಂ.ವೆಂಕಟ ಸ್ವಾಮಿ ಮತ್ತಿತರರು ಹಾಜರಿದ್ದರು.