ಶಿಕ್ಷಕರ ನಿಯೋಜನೆ ಕುರಿತು ಶಾಲೆ ಎಸ್ಡಿಎಂಸಿ ಅಧ್ಯಕ್ಷ ಡಾ.ದೇವರಾಜ ಮಂಗಳೂರು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಬಸವರಾಜ ಕಂಪ್ಲಿ, ನೀಲಕಂಠಗೌಡ, ವಿಶ್ವನಾಥರಡ್ಡಿ ಓಣಿಮನಿ, ರುದ್ರಮುನಿ ದೋಟಿಹಾಳ ಮಾತನಾಡಿ, ಎರವಲು ಸೇವೆಗೆ ತೆರಳಿದ ಶಿಕ್ಷಕರನ್ನು ಮರಳಿ ಶಾಲೆಗೆ ತರುವಂತೆ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲು ತೀರ್ಮಾನಿಸಿದರು.