ಶ್ರೀರಾಮನಗರದ ಬಾರ್ನಲ್ಲಿ ಕುಮಾರ ರಾಠೋಡ ಮದ್ಯ ಸೇವನೆ ಮಾಡುತ್ತಿದ್ದಾಗ ಫಿರೋಜ್ ಖಾನ್ ಎಂಬ ವ್ಯಕ್ತಿ ಮದ್ಯದ ಗ್ಲಾಸಿಗೆ ನೀರು ಹಾಕುವಂತೆ ಕೇಳಿದ್ದಾನೆ. ಆಗ ಕುಮಾರ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿ ನೀರು ಹಾಕಿದ್ದ. ‘ಜೈ ಶ್ರೀರಾಮ್’ ಎಂದು ಏಕೆ ಘೋಷಣೆ ಕೂಗಿದೆ ಎಂದು ಫಿರೋಜ್ ಖಾನ್ ತಕರಾರು ತೆಗೆದಿದ್ದು, ಗಲಾಟೆ ತಾರಕಕ್ಕೇರಿದೆ. ಫಿರೋಜ್ ಖಾನ್, ಸಹೋದರ ಸುಲ್ತಾನ್, ಶೇಕ್ಷಾವಲಿ, ನಬಿ, ಶರೀಫ್ ಸೇರಿ 20ಕ್ಕೂ ಹೆಚ್ಚು ಜನರು ಜಾತಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.