ಕನಕಗಿರಿ: ಸಮೀಪದ ರಾಂಪುರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ಹನುಮಂತ ದೇವರ ದೇವಸ್ಥಾನದೊಳಗೆ ಬಂದಿದ್ದ ಕರಡಿಯನ್ನು ಕಂಡ ನಾಯಿಗಳು ಬೊಗಳಿದ ಪರಿಣಾಮ ಕರಡಿ ಅಲ್ಲಿಂದ ಹೊರಗೆ ಬಂದಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ ಹನುಮಂತಪ್ಪ ತಿಳಿಸಿದರು.
ದೇಗುಲಕ್ಕೆ ಬಾಗಿಲು ಇಲ್ಲ, ಭಕ್ತರು ಹನುಮಂತ ದೇವರ ಮೂರ್ತಿಗೆ ಹಾಕಲಾದ ಎಣ್ಣೆ ನೆಕ್ಕಲು ಬಂದಿದೆ ಇದು ಹೊಸದಲ್ಲ ಎಂದು ಅವರು ಮಾಹಿತಿ ನೀಡಿದರು. ಈ ಬಗ್ಗೆ ವಿಡಿಯೊ ವೈರಲ್ ಆಗಿದೆ.