ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಎರಡು ದಿನಗಳಿಂದ ಜನರ ಮೈಮನಗಳಿಗೆ ತಂಪು ಹವೆ ಸೋಕಿ ಆಹ್ಲಾದತೆ ಸೃಷ್ಟಿಸಿದೆ. ದ್ಯಾಮವ್ವ ದೇವಿ ಜಾತ್ರೆ ನಿಮಿತ್ತ ಸಪ್ತಭಜನೆ ಆರಂಭಗೊಂಡಿದ್ದು ಪಟ್ಟಣದಲ್ಲಿ ಯಾವುದೇ ಮೂಲೆಗೆ ಹೋದರೂ ಧ್ವನಿವರ್ಧಕಗಳ ಮೂಲಕ ಈಗ ‘ಓಂ ನಮಃ ಶಿವಾಯ’ ಶಿವನಾಮ ಸಂಕೀರ್ತನೆ, ಜಪ ಹಗಲು ರಾತ್ರಿಯೂ ಮಾರ್ದನಿಸುತ್ತಿದೆ. ಆದರೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಭರಾಟೆ, ಮತಬೇಟೆಗೆ ಸಂಬಂಧಿಸಿದ ಲಕ್ಷಣಗಳು ಗೋಚರಿಸದಿರುವುದು ಚುನಾವಣೆ ಇದೆಯೊ ಇಲ್ಲವೊ ಎಂಬಷ್ಟರ ಮಟ್ಟಿಗೆ ರಾಜಕೀಯ ಚಟುವಟಿಕೆ ತಣ್ಣಗಿದೆ ಎಂಬ ಮಾತು ಕೇಳಿಬಂದಿವೆ.