ಗಂಗಾವತಿ: ಉತ್ತರ ಕರ್ನಾಟಕ ಭಾಗದಲ್ಲಿ ಅದ್ವಿತೀಯ ಪ್ರತಿಭೆಗಳಿದ್ದು, ಸೂಕ್ತ ವೇದಿಕೆ, ಅವಕಾಶ, ಪ್ರೋತ್ಸಾಹ ದೊರೆಯಯುತ್ತಿಲ್ಲ. ಈ ಭಾಗದ ಹಿರಿಯ ಕಲಾವಿದರು ಯುವ ಪ್ರತಿಭೆಗಳನ್ನ ಪ್ರೋತ್ಸಾಹಿಸಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಹಿರೇಜಂತಕಲ್ ಪಂಪಾವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೇವಿನಾಳ ಸಂಜಯ ಅವರ ನಿರ್ದೇಶನದ ’ಲಕ್ಕಿ ಲವ್ ಸ್ಟೋರಿ’ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಜಾಲತಾಣದಿಂದ ಸಾಕಷ್ಟು ಯುವ ಪ್ರತಿಭೆಗಳು ತಮ್ಮಲ್ಲಿನ ನಟನೆಯನ್ನು ಸಾಬೀತುಪಡಿಸಿಕೊಳ್ಳುದ್ದಾರೆ. ಹಿರಿಯ ಕಲಾವಿದವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಟಿಸಲು ಅವಕಾಶಗಳಿಗೆ ಕಾಯುತ್ತಿದ್ದಾರೆ. ಆದರೆ, ಕಲಾವಿದರಿಗೆ ಸರಿಯಾದ ಅವಕಾಶಗಳೇ ಸಿಗುತ್ತಿಲ್ಲ. ರಂಗಭೂಮಿ ಕಲೆಗೆ ಉತ್ತರ ಕರ್ನಾಟಕ ಸಾಕಷ್ಟು ಕಲಾವಿದರನ್ನು ನೀಡಿದೆ ಎಂದರು.
ನಿರ್ದೇಶಕ ಬೇವಿನಾಳ್ ಸಂಜಯ್, ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ರಾಘವೇಂದ್ರ ಶೆಟ್ಟಿ, ಚಂದ್ರಪ್ಪ ಉಪ್ಪಾರ, ನಾಗರಾಜ ಇಂಗಳಗಿ, ಬಸವರಾಜ, ಚಂದ್ರಪ್ಪ ನಾಯಕ, ಸಿದ್ದು, ಸಂಜನಾ ರಾಜ್ ಉಪಸ್ಥಿತರಿದ್ದರು.