ಕೊಪ್ಪಳದ ಹಿಂದೂ ಮಹಾಮಂಡಳಿಯ ಗಣೇಶ ವಿಸರ್ಜನೆ ಒಂದು ದಿನ ಮೊದಲೇ ಅಂದರೆ ಭಾನುವಾರ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದರು. ಅದರಂತೆ ಡಿಜೆ ತರಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಯ ಕಾಂಪೌಂಡ್ ಒಂದರ ಒಳಗೆ ಇಡಲಾಗಿತ್ತು. ಆದರೆ ಪೊಲೀಸ್ ಇಲಾಖೆಯಿಂದ ಡಿಜೆಗೆ ಅನುಮತಿ ಇಲ್ಲ. ಆದ್ದರಿಂದ ಅದನ್ನು ಬಳಸಬಾರದು ಎಂದು ತಿಳಿಸಲಾಯಿತು. ಅಲ್ಲದೆ ಡಿಜೆ ಇಡಲಾಗಿದ್ದ ಆ ಮನೆಯ ಕಾಂಪೌಡ್ ಗೇಟಿಗೆ ಬೀಗ ಜಡಿಯಲಾಗಿತ್ತು. ಸ್ಥಳದಲ್ಲಿ ಕೊಪ್ಪಳ ತಹಶೀಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭದ್ರತೆ ಒದಗಿಸಿದ್ದರು.