ಗಾಯಕ ಜೀವನಸಾಬ ಬಿನ್ನಾಳ, ಗಾಯಕರಾದ ಸೂರ್ಯಕಾಂತ, ಶರಣಪ್ಪ ವಡಗೇರಿ, ಭಾಷು ಹಿರೇಮನಿ, ಇತರರ ಗಾಯನ ಗಮನ ಸೆಳೆಯಿತು. ಮಾನ್ಯಶ್ರೀ ಮಹೇಂದ್ರಕರ್ ಡಿ, ಪ್ರೇರಣಾ ಅವರು ಭರತ ನಾಟ್ಯ ಹಾಗೂ ಗಂಗಾವತಿಯ ಶ್ರೀರಾಮನಗರದ ಶ್ರೀನಿವಾಸ ತಂಡದ ಕೋಲಾಟ, ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ, ರಂಜಿತಾ ಹಾಗೂ ಸೂರ್ಯಕಾಂತ ತಂಡದವರಿಂದ ಪ್ರದರ್ಶನಗೊಂಡ ರಾಜಾ ಉಡುಚಪ್ಪ ನಾಯಕ ನಾಟಕ, ಪ್ರದರ್ಶನಗೊಂಡವು.