ಮಲ್ಲಿಗೆವಾಡ, ನವಲಿ, ಚಿರ್ಚನಗುಡ್ಡ, ಚಿರ್ಚನಗುಡ್ಡ ತಾಂಡ, ಆಕಳಕುಂಪಿ, ಡಂಕನಕಲ್, ಕಾರಟಗಿ, ಜೀರಾಳ, ಕಲ್ಗುಡಿ, ಕನಕಗಿರಿ, ಕಾಟಾಪುರ, ಕಲಕೇರಿ, ಹಟ್ಟಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಹೂ, ಉತ್ತುತ್ತಿ, ಬಾಳೆ ಹಣ್ಣು ತೇರಿನ ಕಡೆಗೆ ಎಸೆದು ಭಕ್ತರು ಧನ್ಯತೆ ಮೆರೆದರು. ಭಾಜಾ ಭಜಂತ್ರಿ, ಲಕ್ಷ್ಮೀದೇವಿಯ ಸ್ಮರಣೆ ರಥೋತ್ಸವಕ್ಕೆ ಕಳೆ ತಂದಿತು. ಗ್ರಾಮದಲ್ಲಿ ಎರಡು ರಥಗಳನ್ನು ಎಳೆಯಲಾಗುತ್ತಿದ್ದು ಸೋಮವಾರ ಗಂಡಸರು ಎಳೆದರೆ, ಮಂಗಳವಾರ ಮಹಿಳೆಯರು ಎಳೆಯುವುದು ಇಲ್ಲಿ ವಾಡಿಕೆಯಾಗಿದೆ.