ಗ್ರಾಮದಲ್ಲಿ ಕುಡಿಯುವ ನೀರು ಅಶುದ್ಧವಾಗಿರುವುದು, ನೈರ್ಮಲ್ಯ ಕೊರತೆ, ಮಾಲಿನ್ಯ ಸಮಸ್ಯೆ ಬಗ್ಗೆ ಜನ ದೂರುತ್ತಿದ್ದಾರೆ. ಸೊಳ್ಳೆಯಿಂದ ಸೋಂಕು ಹರಡುತ್ತಿದ್ದು, ಮನೆಗಳಲ್ಲಿ ಬಹುದಿನಗಳಿಂದ ಸಂಗ್ರಹಿಸಿಟ್ಟುಕೊಂಡಿರುವ ಶುದ್ಧ ನೀರಿನಲ್ಲಿ ಇಂಥ ಸೊಳ್ಳೆಗಳ ಲಾರ್ವಾಗಳು ಇರುತ್ತವೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯೊಳಗೆ ಬರುವುದಕ್ಕೆ ಗ್ರಾಮಸ್ಥರು ಅವಕಾಶ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಕೊಪ್ಪಳ ಡಿಎಚ್ಒ ಡಾ.ಲಿಂಗರಾಜು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.