ಕುಕನೂರು: ತಾಲ್ಲೂಕಿನ ಮಂಡಲಗಿರಿ ಗ್ರಾಮದ ಪ್ರವೀಣಕುಮಾರ ರಾಮಪ್ಪ ಕುರಿ (28) ಎಂಬ ರೈತ ಬುಧವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರವೀಣಕುಮಾರ ₹16.75 ಲಕ್ಷ ಸಾಲ ಮಾಡಿ ಮನೆ ಕಟ್ಟಿಸಿ ಮದುವೆ ಮಾಡಿಕೊಂಡಿದ್ದ. ಆದರೆ ಕಳೆದ ವರ್ಷ ಬರಗಾಲದಿಂದ ಸರಿಯಾದ ಬೆಳೆ ಬಾರದೆ ಸಾಲದ ಬಾದೆ ಹೆಚ್ಚಾಗಿ ಮನನೊಂದು ತಮ್ಮ ಹೊಲದಲ್ಲಿನ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.