ಕಾರಟಗಿ: ಭಾರತೀಯ ಮಹಿಳಾ ಒಕ್ಕೂಟದ ಪ್ರಥಮ ಸಮ್ಮೇಳನವು ಗುರುವಾರ ನಡೆದು, ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೊತೆಗೆ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮುಖ್ಯಸ್ಥೆ ಸುನೀತಾ ತಿಳಿಸಿದ್ದಾರೆ.
ಒಕ್ಕೂಟದ ಪದಾಧಿಕಾರಿಗಳು: ಕಾಮಾಕ್ಷಿ (ಅಧ್ಯಕ್ಷೆ), ನೀಲಮ್ಮ ಬಸವೇಶ್ವರ ನಗರ (ಉಪಾಧ್ಯಕ್ಷೆ), ಸುನೀತಾ ಗೋವಿಂದಪ್ಪ (ಕಾರ್ಯದರ್ಶಿ), ಶಿವಮ್ಮ (ಸಹ ಕಾರ್ಯದರ್ಶಿ), ಶಶಿಕಲಾ (ಖಜಾಂಚಿ), ಈರಮ್ಮ, ರಾಜೇಶ್ವರಿ, ಶಿವಮ್ಮ, ಲಕ್ಷ್ಮೀ, ರೇಣುಕಾ, ಅನ್ನಪೂರ್ಣ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.
ಒಕ್ಕೂಟದ ರಾಜ್ಯ ಕಾರ್ಯದರ್ಶಿ ರೇಣುಕಾ ಗಜಪೂರ, ಮಾನವ ಹಕ್ಕುಗಳ ಆಯೋಗದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷೆ ಡಾ. ಆರ್.ಈರಮ್ಮ, ಜಿಲ್ಲಾ ಘಟಕದ ಎ.ಹುಲಗಪ್ಪ, ಎ.ಎಲ್. ತಿಮ್ಮಣ್ಣ ಉಪಸ್ಥಿತರಿದ್ದರು.