ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ತಹಸೀಲ್ದಾರ ದಿನೇಶ ಮಾತನಾಡಿದರು. ತಡರಾತ್ರಿ ಸಾಕಷ್ಟು ಪ್ರಮಾಣದ ಮದ್ದು ಸುಡುವ ಮೂಲಕ ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು. ಜೊತೆಗೆ ನಂದಿಕೋಲು ಕುಣಿತ ಜನರನ್ನು ಆಕರ್ಷಸಿತು. ಮದ್ದುಸುಡುವ ಕಾರ್ಯವನ್ನು ಕಣ್ಣಾರೆ ವೀಕ್ಷಿಸಲು ಹಾಗೂ ದೇವರ ಎದುರಲ್ಲಿ ದೀಪಾರಾಧನೆಗೆ ದೂರ ದೂರದ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.