ಹನುಮಂತಪ್ಪ ಅವರು ಜಮೀನಿನಲ್ಲಿ ಶೇಂಗಾ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಯುತ್ತಿದ್ದರು. ಆದರೆ, ಮಳೆ ಕೊರತೆಯಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆ ಆಯಿತು. ಹೀಗಾಗಿ ಇಳುವರಿ ಕಡಿಮೆ ಆಯಿತು.ಹೀಗಾಗಿ ಪರ್ಯಾಯ ಕೃಷಿ ಮಾಡುವ ಬಗ್ಗೆ ಯೋಚಿಸುತ್ತಿದ್ದಾಗ ರೇಷ್ಮೆ ಕೃಷಿ ಹೊಳೆಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು ರೇಷ್ಮೆ ಬೆಳೆಯ ಬಗ್ಗೆ ಮಾಹಿತಿ ಪಡೆದರು. ನಂತರ ಇಲಾಖೆಯ ಸಹಾಯಧನ, ರೇಷ್ಮೆ ಹುಳುಗಳು, ಸೊಪ್ಪು ಬೆಳೆಯುವುದು, ರೇಷ್ಮೆ ಗೂಡು ಮಾರುಕಟ್ಟೆ, ಹುಳು ಸಂರಕ್ಷಣೆ ಬಗ್ಗೆ ತಿಳಿದು ಕೃಷಿ ಆರಂಭಿಸಿದರು.