‘ಗ್ರಾಮದ ಮಧ್ಯಭಾಗದಲ್ಲಿ ಕಳೆದ 30 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಯಿಸಿ ಕೈಪಂಪ್ನ್ನು ಹಾಕಲಾಗಿತ್ತು. ಬೋರ್ವೆಲ್ನಿಂದ ಸುತ್ತಲಿನ ಡೇರಿ, ಆಸ್ಪತ್ರೆ, ಶಾಲಾ ಮಕ್ಕಳು, ಹಿಂದುಳಿದ, ಪರಿಶಿಷ್ಟ ವಿಭಾಗಗಳ ಜನರು ಕುಡಿಯುವ ನೀರನ್ನು ಪಡೆಯುತ್ತಿದ್ದರು. ಇತ್ತೀಚೆಗೆ ಬರಗಾಲ ಆವರಿಸಿದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಗ್ರಾಮಪಂಚಾಯಿತಿ ಅಧ್ಯಕ್ಷರಾಗಿರುವ ಚಿಕ್ಕಣ್ಣಗೌಡ ಎಂಬವರು ಶುದ್ಧ ಕುಡಿಯುವ ನೀರಿನ ಘಟಕಕ್ಕೆಂದು ₹500 ರೂಪಾಯಿ ಬಾಡಿಗೆಗೆ ಪಡೆದು ಸದರಿ ಕೈಪಂಪ್ ಅಳವಡಿಸಿದ್ದ ಬೋರ್ವೆಲ್ಗೆ ಮೋಟರ್ ಹಾಕಿಸಿ, ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ’ ಎಂದು ಮುತ್ತುರಾಜು ದೂರಿದ್ದಾರೆ.