‘ನಾನು ಎಂದಿಗೂ ರೈತರ ವಿರೋಧಿಯಲ್ಲ, ರೈತರ ಪರವಾಗಿದ್ದೇನೆ. ರೈತರು ವ್ಯಸನಿಗಳಾಗಬಾರದು, ಅಂತಹ ರೈತರ ಸಾಲ ಮನ್ನಾ ಮಾಡಬಾರದು ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ. ಆದರೆ ಅದು ತೀವ್ರ ಚರ್ಚೆಗೆ ಕಾರಣವಾಗಿತ್ತು. ದೇಶಕ್ಕೆ ಅನ್ನ ಹಾಕುವ ರೈತನ ವಿರುದ್ಧವಾಗಿ ನಾನು ಎಂದಿಗೂ ಮಾತನಾಡಿಲ್ಲ. ದೇಶದ ಬೆನ್ನೆಲುಬಾಗಿರುವ ರೈತರು ನೆಮ್ಮದಿಯಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಬಸವಣ್ಣ ಕೂಡ ರೈತರನ್ನು ದೇವರೆಂದೇ ಭಾವಿಸಿದ್ದರು, ರೈತರ ಮನೆಯಲ್ಲಿ ಲಿಂಗಪೂಜೆ ಮಾಡೋಣ ಎಂದು ಕರೆ ಕೊಟ್ಟಿದ್ದರು. ಅದೇ ಹಾದಿಯಲ್ಲಿ ನಾವು ನಡೆಯಬೇಕು’ ಎಂದು ಹೇಳಿದರು.