ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿದಿದೆ. ಹಳ್ಳಗಳು ಮತ್ತು ಕೃಷಿ ಭೂಮಿಯಿಂದ ಕಾವೇರಿ ನದಿಗೆ ನೀರು ಹರಿದು ಬಂದಿದ್ದು, ನದಿಯ ನೀರು ಕೆಂಬಣ್ಣಕ್ಕೆ ತಿರುಗಿತ್ತು. ಪಟ್ಟಣದ ಬೂದಿಗುಂಡಿ ಬಡಾವಣೆಯಲ್ಲಿ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.