ಭಾರಿ ಬಿರುಗಾಳಿಗೆ ಪಟ್ಟಣದಾದ್ಯಂತ ವ್ಯಾಪಕವಾಗಿ ಧೂಳು ಆವರಿಸಿತ್ತು. ಪಾದಚಾರಿಗಳು ಅವಿತುಕೊಳ್ಳುವಂತಾಗಿತ್ತು. ವಾಹನ ಸವಾರರು ಕೂಡ ಗಾಳಿಯ ರಭಸಕ್ಕೆ ಪರದಾಡಿದರು. ಅಲ್ಲಲ್ಲಿ ರೆಂಬೆ, ಕೊಂಬೆಗಳು ಮುರಿದಿವೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಅರಕೆರೆ, ಆಲಗೂಡು, ಕೆ.ಶೆಟ್ಟಹಳ್ಳಿ, ಗಣಂಗೂರು, ಬಾಬುರಾಯನಕೊಪ್ಪಲು, ಮರಳಾಗಾಲ ಇತರೆಡೆ ಗಾಳಿ ಸಹಿತ ಮಳೆ ಸುರಿಯಿತು.