ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಲವು ಅವ್ಯವಹಾರ ನಡೆದಿವೆ. ನೇಮಕಾತಿಯಲ್ಲಿ ಮೀಸಲಾತಿ ಅನ್ವಯಿಸಿರಲಿಲ್ಲ. ಈ ಕುರಿತಂತೆ, ಸಹಕಾರ ಉಪನಿಬಂಧಕರಿಗೆ ನೀಡಿದ್ದ ದೂರಿನ ಅನ್ವಯ ದಿನಾಂಕ ನ.18ರಂದುರಂದು ವಿಚಾರಣೆಗೆ ಕರೆಯಲಾಗಿತ್ತು. ದೂರು ನೀಡಲು ಬಂದಿದ್ದ ನನ್ನ ಮೇಲೆ ಡೇರಿ ಕಾರ್ಯದರ್ಶಿ ಸೇರಿದಂತೆ 10 ಮಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.