<p><strong>ಭಾರತೀನಗರ</strong>: ಸೂಳೆಕೆರೆ ನಾಲೆಯಿಂದ ಉತ್ತರ ಮತ್ತು ದಕ್ಷಿಣ ನಾಲೆಗಳಿಗೆ ನೀರು ಹರಿರಿಸಿ ರೈತರ ಕೃಷಿಗೆ ಅನುಕೂಲ ಕಲ್ಪಿಸಬೇಕೆಂದು ‘ಭಾರತೀನಗರ ಸೂಳೆಕೆರೆ ಹಿತರಕ್ಷಣ ಸಮಿತಿ’ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.</p>.<p>ರೈತರು ಈಗಾಗಲೇ ಬರಗಾಲದಿಂದ ತತ್ತರಿಸಹೋಗಿದ್ದು, ನೀರಿನ ಸೌಲಭ್ಯವಿಲ್ಲದೆ, ಮಳೆಯ ಕೊರತೆಯಿಂದಾಗಿ ಹಿಂಗಾರು ಬೆಳೆಯಲ್ಲೂ ನಷ್ಟದಿಂದ ಕಂಗಾಲಾಗಿದ್ದಾರೆ. ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಆಗುತ್ತಿದ್ದು , ಭತ್ತದ ಸಸಿ ಮಡಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಕಾವೇರಿ ನೀರಾವರಿ ನಿಗಮವು ಸೂಳೆಕೆರೆಗೆ ನೀರು ತುಂಬಿಸಲು ಆಸಕ್ತಿಹೊಂದಿಲ್ಲ. ಕೆರೆಗೆ ಬರಬೇಕಿದ್ದ ನೀರನ್ನು ಹೆಬ್ಬಳ್ಳ ಚೆನ್ನಯ್ಯ ನಾಲೆಗೆ ತಿರುಗಿಸಿ(ಪಿಕಪ್) , ಕೆರೆಯ ನಾಲಾ ಅಚ್ಚುಕಟ್ಟು ರೈತರಿಗೆ ಅನ್ಯಾಯವೆಸಗಿದ್ದಾರೆ. ನಾಲಾ ಭಾಗದಲ್ಲಿ ದನ,ಕರುಗಳು, ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೆ ತತ್ವಾರ ಬಂದೊದಗಿದೆ. ಕೂಡಲೇ ಸೂಳೆಕೆರೆ ವ್ಯಾಪ್ತಿಯ ಎರಡೂ ನಾಲೆಗಳಿಗೂ ನೀರು ಹರಿಯಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಬೆಳೆ ಪರಿಹಾರಕ್ಕೆ ಒತ್ತಾಯ: ಸರ್ಕಾರ ಬೆಳೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿದ್ದು , ಕೃಷಿ ಇಲಾಖಾಧಿಕಾರಿಗಳು ಬರಗಾಲದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ಮೊತ್ತವನ್ನು ಬಿಡುಗಡೆಗೊಳಿಸಬೇಕು. ಬೆಳೆ ಪರಿಹಾರದಿಂದ ಬರುವ ಹಣದಿಂದ ರೈತರು ಬಿತ್ತನೆ ಬೀಜ, ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ ಎಂದು ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತೀನಗರ</strong>: ಸೂಳೆಕೆರೆ ನಾಲೆಯಿಂದ ಉತ್ತರ ಮತ್ತು ದಕ್ಷಿಣ ನಾಲೆಗಳಿಗೆ ನೀರು ಹರಿರಿಸಿ ರೈತರ ಕೃಷಿಗೆ ಅನುಕೂಲ ಕಲ್ಪಿಸಬೇಕೆಂದು ‘ಭಾರತೀನಗರ ಸೂಳೆಕೆರೆ ಹಿತರಕ್ಷಣ ಸಮಿತಿ’ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.</p>.<p>ರೈತರು ಈಗಾಗಲೇ ಬರಗಾಲದಿಂದ ತತ್ತರಿಸಹೋಗಿದ್ದು, ನೀರಿನ ಸೌಲಭ್ಯವಿಲ್ಲದೆ, ಮಳೆಯ ಕೊರತೆಯಿಂದಾಗಿ ಹಿಂಗಾರು ಬೆಳೆಯಲ್ಲೂ ನಷ್ಟದಿಂದ ಕಂಗಾಲಾಗಿದ್ದಾರೆ. ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಆಗುತ್ತಿದ್ದು , ಭತ್ತದ ಸಸಿ ಮಡಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಕಾವೇರಿ ನೀರಾವರಿ ನಿಗಮವು ಸೂಳೆಕೆರೆಗೆ ನೀರು ತುಂಬಿಸಲು ಆಸಕ್ತಿಹೊಂದಿಲ್ಲ. ಕೆರೆಗೆ ಬರಬೇಕಿದ್ದ ನೀರನ್ನು ಹೆಬ್ಬಳ್ಳ ಚೆನ್ನಯ್ಯ ನಾಲೆಗೆ ತಿರುಗಿಸಿ(ಪಿಕಪ್) , ಕೆರೆಯ ನಾಲಾ ಅಚ್ಚುಕಟ್ಟು ರೈತರಿಗೆ ಅನ್ಯಾಯವೆಸಗಿದ್ದಾರೆ. ನಾಲಾ ಭಾಗದಲ್ಲಿ ದನ,ಕರುಗಳು, ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೆ ತತ್ವಾರ ಬಂದೊದಗಿದೆ. ಕೂಡಲೇ ಸೂಳೆಕೆರೆ ವ್ಯಾಪ್ತಿಯ ಎರಡೂ ನಾಲೆಗಳಿಗೂ ನೀರು ಹರಿಯಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಬೆಳೆ ಪರಿಹಾರಕ್ಕೆ ಒತ್ತಾಯ: ಸರ್ಕಾರ ಬೆಳೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿದ್ದು , ಕೃಷಿ ಇಲಾಖಾಧಿಕಾರಿಗಳು ಬರಗಾಲದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ಮೊತ್ತವನ್ನು ಬಿಡುಗಡೆಗೊಳಿಸಬೇಕು. ಬೆಳೆ ಪರಿಹಾರದಿಂದ ಬರುವ ಹಣದಿಂದ ರೈತರು ಬಿತ್ತನೆ ಬೀಜ, ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ ಎಂದು ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>