ಚಂದಗಾಲು– ಮೇಳಾಪುರ ಗ್ರಾಮಗಳ ಸಂಪರ್ಕ ರಸ್ತೆ ಹದಗೆಟ್ಟಿದ್ದು, ಬೈಕ್ ಓಡಿಸಲೂ ಆಗದ ಸ್ಥಿತಿ ಬಂದಿದೆ. ಹೆಜ–ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ಬಸ್, ಕಾರು, ಕಬ್ಬು ತುಂಬಿದ ಲಾರಿಗಳು, ಎತ್ತಿನ ಗಾಡಿಗಳು ಹೆಚ್ಚು ಓಡಾಡುತ್ತವೆ. ಆದರೂ ರಸ್ತೆಯನ್ನು ದುರಸ್ತಿ ಮಾಡಿಸಿಲ್ಲ. ನಿಮಗೆ ರಸ್ತೆಯ ದುಸ್ಥಿತಿ ಕಾಣುತ್ತಿಲ್ಲವೆ ಎಂದು ಗ್ರಾಮದ ರಾಜು, ಅಶೋಕ್, ಪ್ರದೀಪ್, ಡೈರಿ ಶಂಕರ್ ಪ್ರಶ್ನಿಸಿದರು.