‘ಹಬ್ಬದ ದಿನ ಮನೆಯೊಳಗೆ ಲಕ್ಷ್ಮೀಯನ್ನು ಪೂಜಿಸಿ, ಹೊರಗಡೆ ಲಕ್ಷ್ಮೀಯ ಭಾವಚಿತ್ರವಿರುವ ಪಟಾಕಿ ಸಿಡಿಸಿ, ಅದನ್ನು ಚಪ್ಪಲಿ ಕಾಲಲ್ಲಿ ತುಳಿದುಕೊಂಡು ಓಡಾಡುವುದು ವಿಪರ್ಯಾಸ. ಯಾರೊಬ್ಬರೂ ದೇವರ ಚಿತ್ರವಿರುವ ಪಟಾಕಿ ಸಿಡಿಸಬೇಡಿ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಕೋರಿದರು.