ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಎಂ.ಮುತ್ತುರಾಜ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಮಾಂಡೊ ಪಡೆ, ಅಶ್ವಾರೋಹಿದಳ, ಕೇಂದ್ರ ಸಶಸ್ತ್ರ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಕೆಎಸ್ಆರ್ಪಿ ಪಡೆಗಳು ಭಾಗವಹಿಸಿದ್ದವು. ಗಸ್ತು ವಾಹನಗಳಾದ ಚೀತಾ, ಗರುಡ, ಇಂಟರ್ಸೆಪ್ಟರ್, ಮೊಬೈಲ್ ಕಮಾಂಡ್ ವಾಹನ, ಪೊಲೀಸ್ ಬ್ಯಾಂಡ್ಗಳು ಭಾಗವಹಿಸಿದ್ದವು.