ಕೆ.ಬಿ.ಪ್ರಭುಪ್ರಸಾದ್ ಮಾತನಾಡಿ, ‘ನಾನು ಸಾಮಾನ್ಯ ವ್ಯಕ್ತಿ; ಅಸಾಧಾರಣ ಸಾಧನೆಯೇನೂ ಮಾಡಿಲ್ಲ. ನನಗೆ ‘ಪ್ರಶಾಂತ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ. ಸ್ನೇಹಿತರು, ಬಂಧುಗಳು, ವಿದ್ವಾಂಸರು, ವಿಮರ್ಶಕರು ನನ್ನೊಂದಿಗಿನ ಒಡನಾಟ, ಸಾಹಿತ್ಯ ಕೃತಿಗಳ ಬಗ್ಗೆ ಅವಲೋಕನ ಮಾಡಿದ್ದಾರೆ. ನನ್ನಲ್ಲಿನ ಅವಗುಣಗಳನ್ನು ಬಿಟ್ಟು, ಗುಣಗಳನ್ನು ಮಾತ್ರ ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ’ ಎಂದು ತಿಳಿಸಿದರು.