ರೈತ ಮುಖಂಡ ನಿಲುವಾಗಿಲು ಪ್ರಭಾಕರ್ ಮಾತನಾಡಿ, ‘ಮಾರುಕಟ್ಟೆ ಆರಂಭವಾಗಿ 34 ದಿನಗಳು ಕಳೆದಿದ್ದು, ಲೋಗ್ರೇಡ್ ತಂಬಾಕನ್ನು ಕೇಳುವವರಿಲ್ಲ. ಎರಡು ಮತ್ತು ಮೂರನೇ ದರ್ಜೆ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿಲ್ಲ. ಕೆಲವು ಕಂಪನಿಗಳು ‘ಎ ಗ್ರೇಡ್’ ತಂಬಾಕು ಖರೀದಿಗೆ ಸೀಮಿತವಾಗಿದ್ದು, ರೈತರಿಗೆ ನಷ್ಟ ಉಂಟಾಗುತ್ತಿದೆ’ ಎಂದು ದೂರಿದರು.