ಹೀಗಾಗಿ, ವಿಜೇಶ್ ಅವರು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ ₹ 3.32 ಲಕ್ಷ ಪರಿಹಾರ ನೀಡುವಂತೆ ಕೋರಿದ್ದರು. ಅಲ್ಲದೇ, ತಾವೇ ವಾದವನ್ನೂ ಮಂಡಿಸಿದ್ದರು. ವಾದ ಆಲಿಸಿದ ವೇದಿಕೆಯ ಅಧ್ಯಕ್ಷ ಎಚ್.ಎಂ.ಶಿವಕುಮಾರ ಸ್ವಾಮಿ, ಸದಸ್ಯರಾದ ಎಂ.ವಿ.ಭಾರತಿ, ಎಂ.ಸಿ.ದೇವಕುಮಾರ್ ಅವರು ವಿಜೇಶ್ ಪರವಾಗಿ ಆದೇಶ ನೀಡಿದ್ದಾರೆ. 60 ದಿನದೊಳಗೆ ₹ 37 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ.