ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ.ಶುಶ್ರುತ್ ಗೌಡ, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಕೆ.ವಿ.ಲಕ್ಷ್ಮೀದೇವಿ (ವೈದ್ಯಕೀಯ ಕ್ಷೇತ್ರ), ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ (ಹೋಟೆಲ್ ಕ್ಷೇತ್ರ), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಆದರ್ಶ್, ಮೂಡ ಸಹಾಯಕ ಕಾರ್ಯನಿರ್ವಾಹಕ ವಲಯ ಅಧಿಕಾರಿ ಆರ್.ಸಿ.ಕೆಂಪರಾಜ್ (ಸೇವಾಕ್ಷೇತ್ರ), ದಿ ಸಿಟಿ ಕೋ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್.ಸ್ವರೂಪ್ (ಸಹಕಾರ ಕ್ಷೇತ್ರ), ನಟ ಎಸ್ .ಜಯಪ್ರಕಾಶ್ (ಚಲನಚಿತ್ರ ಕ್ಷೇತ್ರ) ಅವರಿಗೆ ‘ಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.