ಇನ್ಪೊಸಿಸ್ನ ಮುಂದೆ ನಿರ್ಜನ ಪ್ರದೇಶದತ್ತ ಹೋಗಬೇಕಿದೆ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಚಾಲಕ ರಘುಸ್ವಾಮಿ ಹೊರಟಿದ್ದಾನೆ. ದಾರಿಯಲ್ಲಿ ಕಲ್ಲು ಮಣ್ಣಿನ ರಸ್ತೆಯಲ್ಲಿ ಕಲ್ಲೊಂದು ಬಿದ್ದಿದ್ದು, ಅದನ್ನು ಪಕ್ಕಕ್ಕೆ ಸರಿಸಲು ಚಾಲಕ ಕೆಳಗೆ ಇಳಿದಿದ್ದಾನೆ. ಈ ವೇಳೆ ಕಾರಿನಲ್ಲೇ ಕೀಯನ್ನು ಬಿಟ್ಟಿದ್ದನ್ನು ಗಮನಿಸಿದ ವ್ಯಕ್ತಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಪ್ರಕರಣ ಇಲವಾಲ ಠಾಣೆಯಲ್ಲಿ ದಾಖಲಾಗಿದೆ.