ಎಚ್.ಡಿ.ಕೋಟೆ ತಾಲ್ಲೂಕು ಕಚೇರಿಯಲ್ಲಿ ‘ಡಿ’ ಗ್ರೂಪ್ ನೌಕರರಾಗಿದ್ದ ಮಹದೇವ 2014ರಲ್ಲಿ ಮೃತಪಟ್ಟರು. ಆಗ ಇವರ ಸೋದರ ಮುರುಗನ್ ಅವರ ಪತ್ನಿ ಪದ್ಮಾ ಎಂಬುವವರು ತಾವು ಮಹದೇವ್ ಅವರ ಪತ್ನಿ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ದಾಖಲೆಗಳ ಪೂರ್ವಾಪರ ವಿಚಾರಿಸದ ತಾಲ್ಲೂಕು ಕಚೇರಿಯ ಅಧಿಕಾರಿಗಳು ಮಹದೇವ್ ಅವರು ಮೃತಪಟ್ಟ ನಂತರ ಸಿಗುವಂತಹ ಸರ್ಕಾರಿ ಸೌಲಭ್ಯಗಳನ್ನು, ನಿವೃತ್ತಿ ವೇತನ, ಇದರ ಬಾಕಿ, ಜೀವ ವಿಮೆ ಹಣ ಸೇರಿ ಲಕ್ಷಾಂತರ ರೂಪಾಯಿಗಳನ್ನು ಪದ್ಮಾ ಅವರಿಗೆ ನೀಡಿದ್ದಾರೆ ಎಂದು ಮಹದೇವ ಅವರ ಪತ್ನಿ ಚಂದ್ರಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪದ್ಮಾ, ಈಕೆಯ ಪತಿ ಮುರುಗನ್ ಹಾಗೂ ತಾಲ್ಲೂಕು ಕಚೇರಿಯಲ್ಲಿ ಇವರಿಗೆ ಸಹಾಯ ಮಾಡಿರಬಹುದಾದ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.