ಪ್ರೋತ್ಸಾಹ ನೀಡಿ: ‘ಪ್ರತಿ ಗ್ರಾಮದಲ್ಲಿ ಸ್ವಇಚ್ಛೆಯಿಂದ ಬೋಧನೆ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಅವರಿಗೆ ಪ್ರಶಂಸನಾ ಪತ್ರ, ಯೋಜನೆಗಳಲ್ಲಿ ಆದ್ಯತೆ ನೀಡಬೇಕು’ ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ‘ಪ್ರತಿ 20 ಅನಕ್ಷರಸ್ಥರಿಗೆ ಒಬ್ಬರು ಸ್ವಯಂ ಬೋಧಕರನ್ನು ನೇಮಿಸಲಾಗುವುದು. 6 ತಿಂಗಳ ಅವಧಿಯ ಬೋಧನೆ ಬಳಿಕ 150 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಶೇ 40 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನ್ನು ಸಾಕ್ಷರರು ಎಂದು ಘೋಷಣೆ ಮಾಡಲಾಗುತ್ತದೆ. ನವ ಸಾಕ್ಷರರಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.