ವಿಷಯ ತಿಳಿದು ಘಟನ ಸ್ಥಳಕ್ಕೆ ಆರ್ಎಫ್ಒ ಕಿರಣ್ ಕುಮಾರ್, ಡಿಆರ್ಎಫ್ಒ ಪಾರ್ವತಿ, ಗಾರ್ಡ್ ರಾಜು, ಸತೀಶ್, ಚಾಲಕ ಪುನೀತ್ ಆಗಮಿಸಿ ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಚಿರತೆ ಬಂಧನ ಸಲುವಾಗಿ ಜನರಿಗೆ ಜಾಗೃತಿ ಮೂಡಿಸಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯರು ಕೂಡಲೇ ಚಿರತೆ ಬಂಧಿಸಿ ಗ್ರಾಮಸ್ಥರು ನೆಮ್ಮದಿ ಜೀವನ ನಡೆಸಲು ಸಹಕರಿಸುವಂತೆ ಒತ್ತಾಯಿಸಿದರು.