ನಂಜನಗೂಡು: ತಾಲ್ಲೂಕಿನ ಈರೇಗೌಡನ ಹುಂಡಿ ಗ್ರಾಮದಲ್ಲಿ ಸೋಮವಾರ ಕಾಡು ಹಂದಿ ಬೇಟಿಗಾಗಿ ಇಡಲಾಗಿದ್ದ ಸಿಡಿಮದ್ದು ಸ್ಪೋಟಗೊಂಡು ಸ್ಥಳದಲ್ಲಿದ್ದ ಎತ್ತು ಸಾವನ್ನಪ್ಪಿದೆ.
‘ಈರೇಗೌಡನಹುಂಡಿ ಗ್ರಾಮದ ಮಹದೇವಯ್ಯ ಎಂಬುವರ ಜಮೀನಿನಲ್ಲಿ ಕಾಡು ಹಂದಿ ಬೇಟೆಯಾಡಲು ಅಕ್ರಮವಾಗಿ ಸಿಡಿಮದ್ದನ್ನು ಸಂಗ್ರಹಿಸಿ ಇಡಲಾಗಿತ್ತು. ಎತ್ತು ಜಮೀನಿನಲ್ಲಿ ಮೇಯುತ್ತಿದ್ದ ವೇಳೆ ಸಿಡಿಮದ್ದಿಗೆ ಬಾಯಿ ಹಾಕಿದಾಗ ಸ್ಪೋಟಗೊಂಡಿದೆ’ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಾಗಿಲ್ಲ.