ಬೆಳಿಗ್ಗೆ 11.15ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ‘ದೆಹಲಿ ನೋಟ: ರಾಜಕೀಯ ವರದಿಗಾರಿಕೆಯ ಸವಾಲುಗಳು’ ವಿಷಯದ ಕುರಿತು ‘ಪ್ರಜಾವಾಣಿ’ ದಾವಣಗೆರೆ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಮಧ್ಯಾಹ್ನ 12ಕ್ಕೆ 2ನೇ ಗೋಷ್ಠಿಯಲ್ಲಿ ‘ಪತ್ರಕರ್ತರಾಗಿ ಮಹಿಳೆಯರು’ ಕುರಿತು ಹಿರಿಯ ಉಪ ಸಂಪಾದಕಿ ಮಂಜುಶ್ರೀ ಎಂ.ಕಡಕೋಳ, ಮಧ್ಯಾಹ್ನ 12.45ಕ್ಕೆ 3ನೇ ಗೋಷ್ಠಿಯಲ್ಲಿ ‘ಫೀಚರ್–ಕೃಷಿ ಬರಹ’ ಕುರಿತ ವಿಷಯವನ್ನು ಮುಖ್ಯ ಉಪ ಸಂಪಾದಕ ಗಾಣಧಾಳು ಶ್ರೀಕಂಠ ಮಂಡಿಸುವರು.