ಇವರು ಇಲ್ಲಿನ ಶಕ್ತಿನಗರದ ನಿವಾಸಿ ಎಲ್ಐಸಿ ನಿವೃತ್ತ ಆಡಳಿತಾಧಿಕಾರಿ ಡಿ.ಶ್ರೀನಿವಾಸ್ ಪುತ್ರ. ಇವರು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಆ ಪರೀಕ್ಷೆಗೆ ತಯಾರಿ ಮುಂದುವರಿಸಿದ್ದಾರೆ. ಅವರನ್ನು ನವೋ ಪ್ರಮತಿ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ರವಿ ಡಿ. ಚನ್ನಣ್ಣವರ್, ಕಾರ್ಯಕಾರಿ ಸಮಿತಿಯ ಎಚ್.ವಿ.ರಾಜೀವ್, ಎಸ್.ಫಣಿರಾಜ್, ಎಸ್.ಆರ್.ರವಿ, ಸಂದೀಪ್ ಮಹಾಜನ್ ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.