ಮೈಸೂರು: ‘ಕರ್ನಾಟಕ ಪ್ರಜಾ ಪಾರ್ಟಿಗೆ ರಾಜೀನಾಮೆ ನೀಡಿರುವೆ. ಶೀಘ್ರದಲ್ಲೇ ಜೆಡಿಎಸ್ಗೆ ಸೇರುವೆ’ ಎಂದು ಮುಖಂಡ ಎಂ.ಸಿ.ಕಾರ್ತಿಕ್ ತಿಳಿಸಿದರು.
‘ಕರ್ನಾಟಕ ಪ್ರಜಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಈಗಾಗಲೇ ರಾಜೀನಾಮೆ ನೀಡಿರುವೆ. ಎಚ್.ಡಿ.ಕೋಟೆಯ ಮಾಜಿ ಶಾಸಕ ಚಿಕ್ಕಣ್ಣ ನೇತೃತ್ವದಲ್ಲಿ ಬೆಂಬಲಿಗರೊಟ್ಟಿಗೆ ಜೆಡಿಎಸ್ ಸೇರುವೆ’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
‘ಎಚ್.ಡಿ.ಕೋಟೆಯಲ್ಲಿ ಜೆಡಿಎಸ್ ಗೆಲುವಿಗಾಗಿ ಪಕ್ಷ ಸಂಘಟಿಸುವೆ. ಚಿಕ್ಕಣ್ಣ ಅವರನ್ನು ಮತ್ತೆ ಶಾಸಕರನ್ನಾಗಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ದುಡಿಯುವೆ’ ಎಂದು ತಿಳಿಸಿದರು.
ಕೆಪಿಪಿ ಪದಾಧಿಕಾರಿ ಜೋಸೆಫ್ ಸಹ ಇದೇ ಸಂದರ್ಭ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಜೆಡಿಎಸ್ನ ಜಿಲ್ಲಾ ಕಾರ್ಯದರ್ಶಿ ಅರ್ಕೇಶ್ವರಯ್ಯ, ಕೆಪಿಪಿ ಪದಾಧಿಕಾರಿಗಳಾದ ಬಸವರಾಜು, ಚೇತನ್ ಪತ್ರಿಕಾಗೋಷ್ಠಿಯಲ್ಲಿದ್ದರು.