‘ಗ್ರಾಮದಲ್ಲಿ ಅರಸು, ನಾಯಕ ಹಾಗೂ ದಲಿತ ಸಮುದಾಯದವರು ವಾಸವಿದ್ದಾರೆ. ಮುಜರಾಯಿ ಇಲಾಖೆಯ 3 ದೇವಸ್ಥಾನಗಳಿದ್ದು, ಅನಾದಿ ಕಾಲದಿಂದಲೂ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ. ಅನೇಕರು ಈ ಅಸ್ಪೃಶ್ಯತೆಯನ್ನು ಮೌನದಿಂದ ಒಪ್ಪಿಕೊಂಡಿದ್ದು, ಪ್ರಶ್ನಿಸುವವರನ್ನು ಬಹಿಷ್ಕರಿಸಲಾಗುತ್ತಿದೆ. ಅಧಿಕಾರಿಗಳೂ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಕಾನೂನುಬಾಹಿರ, ದಬ್ಬಾಳಿಕೆಯ ಉತ್ಸವಕ್ಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.