ಮೈಸೂರು: ‘ಸಾಹಿತಿ, ಪತ್ರಕರ್ತ ಬನ್ನೂರು ಕೆ.ರಾಜು ಅವರು ಸಾತ್ವಿಕ ಆಲೋಚನೆಯುಳ್ಳ ಸಂತತನದ ಚಿಂತಕ’ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್. ಶಿವರಾಜಪ್ಪ ಬಣ್ಣಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು 60 ವರ್ಷ ಪೂರೈಸಿದ ಬನ್ನೂರು ರಾಜು ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ರಾಜು ಅವರು ಬರವಣಿಗೆ ಮೂಲಕ ಮಾಡಿದ್ದಾರೆ’ ಎಂದರು.
ಸಾಹಿತಿ ಬನ್ನೂರು ಕೆ.ರಾಜು, ಪತ್ನಿ ಮಹಾಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು.
ಹೊಸಮಠದ ಚಿದಾನಂದ ಸ್ವಾಮೀಜಿ, ಸಂಸ್ಕೃತ ವಿದ್ವಾಂಸರಾದ ಕೆ.ಲೀಲಾ ಪ್ರಕಾಶ್, ಸಮಾಜ ಸೇವಕ ರಘುರಾಂ ವಾಜಪೇಯಿ, ಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಕಲಾವಿದೆ ಸುಮಾ ರಾಜ್ಕುಮಾರ್, ನಟ ಸುಪ್ರೀತ್, ಮೂಗೂರು ನಂಜುಂಡ ಸ್ವಾಮಿ ಇದ್ದರು.