ಸದಸ್ಯ ಬೀರಿಹುಂಡಿ ಬಸವಣ್ಣ ಇದಕ್ಕೆ ಸಹಮತ ವ್ಯಕ್ತಪಡಿಸಿ, ‘ನಿಮ್ಮ ಇಲಾಖೆಗೆ ಅಂಗವಿಕಲ ಕೋಟಾದ ಅನುದಾನ ಹೊರತುಪಡಿಸಿ ₹ 6.06 ಕೋಟಿ ಹಣ ನಿಗದಿಯಾಗಿದೆ. ಪ್ರತಿಯೊಬ್ಬ ಸದಸ್ಯರಿಗೆ ಹಂಚಿದರೆ ತಲಾ ₹ 12 ಲಕ್ಷ ಸಿಗಲಿದೆ. ಕ್ರಿಯಾಯೋಜನೆ ತಯಾರಿಸಲು ನಿಮಗೇನು ಸಮಸ್ಯೆ’ ಎಂದು ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಸಭೆಯನ್ನು ಬೆಳಿಗ್ಗೆ ಕರೆಯುವಂತೆ ಅಧ್ಯಕ್ಷರನ್ನು ಕೋರಿದರು.