ಕರ್ನಾಟಕದ ಬಹುತ್ವದ ಆಶಯಗಳನ್ನು ಬೆಂಬಲಿಸುವುದು ಮತ್ತು ವಿಸ್ತರಿಸುವುದು. ನಾಡು-, ನುಡಿ-, ಸಾಹಿತ್ಯ-, ಸಂಸ್ಕೃತಿ ಪ್ರಜ್ಞೆ ಎತ್ತಿ ಹಿಡಿಯುವುದು. ಕನ್ನಡ ಸಾಹಿತ್ಯ ಪ್ರತಿಪಾದಿಸಿದ ಬಹುಜನರ ಸಂಸ್ಕೃತಿ,- ಮಹಿಳೆ, ಅಲಕ್ಷಿತ ಸಮುದಾಯಗಳು, ರೈತರು ಹಾಗೂ ಎಲ್ಲಾ ವರ್ಗದ ಸಂವೇದನೆ ಸಂಕಲಿಸುವುದು ಈ ವಿಚಾರ ಸಂಕಿರಣದ ಆಶಯ ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶುಭಾ ಮರವಂತೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.