ಈ ಶ್ರೀಕ್ಷೇತ್ರ ವರದಾ, ದಂಡಾವತಿ, ಕಚವಿಹಳ್ಳಗಳ ತ್ರಿವೇಣಿ ಸಂಗಮ. ಕೇವಲ ಜೈನರಲ್ಲದೇ ಎಲ್ಲ ಧರ್ಮದವರು ಮಠಕ್ಕೆ ಬರುತ್ತಾರೆ. ಬಡ ಮಕ್ಕಳಿಗಾಗಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ನಡೆಸುತ್ತಿದ್ದೇವೆ. ಎಲ್ಲರಿಗೂ ಉಚಿತ ಶಿಕ್ಷಣವಿದೆ. ಬಸದಿಗಳು, ಧರ್ಮಪೀಠ, ಕುಲದೇವತಾ ಮಂದಿರ, ನವಗ್ರಹ, ಯಾತ್ರಿನಿವಾಸ, ಸಮುದಾಯ ಭವನ ಹೀಗೆ ಸುಮಾರು 20 ಕಟ್ಟಡಗಳು ಇಲ್ಲಿವೆ. ಈಗ ಈ ಐತಿಹಾಸಿಕ, ಧಾರ್ಮಿಕ ಮಠ ಂಪೂರ್ಣ ಹಾಳಾಗಿದೆ. ಪುನರ್ ನಿರ್ಮಾಣಕ್ಕೆ ಕನಿಷ್ಠ ₨ 20 ಕೋಟಿ ಬೇಕಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಹಾಯ ಮಾಡಬೇಕು ಎಂದು ವಿನಂತಿಸಿದರು.