<p>ದೇವದುರ್ಗ: ‘ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭದಿಂದ ಐಸಿಡಿಸಿ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ಈ ಆದೇಶವನ್ನು ಪರಿಷ್ಕರಿಸಬೇಕು’ ಎಂದು ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಹೇಳಿದರು.</p>.<p>ಪಟ್ಟಣದ ಶಾಸಕರ ಕಚೇರಿ ಎದುರು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭ ವಿರೋಧಿಸಿ ಸಿಐಟಿಯು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿರು.</p>.<p>ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿಸುವಂತೆ ಅಧಿವೇಶನದಲ್ಲಿ ಮಹಿಳೆಯರ ಪರ ಧ್ವನಿಯಾಗುವಂತೆ ಶಾಸಕಿ ಕರೆಮ್ಮ ಜಿ.ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ರಂಗಮ್ಮ ಅನ್ವರ, ರಮಾದೇವಿ ಮಾತನಾಡಿದರು. ಬಸಲಿಂಗಮ್ಮ, ಚಂದ್ರಕಲಾ, ಲೀಲಾವತಿ, ಶಕೀಲಾ, ಹನುಮಂತಿ, ಸುಜಾತಾ ನಾಯಕ, ರೇಣುಕಾ ಬೊಮ್ಮನಾಳರ್, ಖುಷಿದ ಬೇಗಂ ಕರಿಗುಡ್ಡ, ರಂಗಮ್ಮ, ಸುರೇಖಾ, ರಾಧಿಕಾ, ಜಯಲಕ್ಷ್ಮಿ, ಕೌಸರ್ ಬೇಗಂ, ಪಾಪಮ್ಮ ನಿಲೋಗಲ್, ಗೋದಾವರಿ, ಹೈದರಬಿ ಜಾಲಹಳ್ಳಿ, ಮಹಾಲಕ್ಷ್ಮಿ ಭಾಗವಹಿಸಿದ್ದರು.</p>.<p>ನೂತನ ಎಲ್ಕೆಜಿ ಮತ್ತು ಯುಕೆಜಿಯಿಂದ ಅಂಗನವಾಡಿ ಕೇಂದ್ರಗಳು ದುರ್ಬಲಗೊಳ್ಳಲಿವೆ. ವೈಜ್ಞಾನಿಕವಾಗಿ ಪ್ರಾರಂಭಿಸುವಂತೆ ಸದನದಲ್ಲಿ ಪ್ರಸ್ತಾಪಿಸುವೆ.</p>.<p>ಕರೆಮ್ಮ ಜಿ.ನಾಯಕ, ಶಾಸಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವದುರ್ಗ: ‘ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭದಿಂದ ಐಸಿಡಿಸಿ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರ ಈ ಆದೇಶವನ್ನು ಪರಿಷ್ಕರಿಸಬೇಕು’ ಎಂದು ಸಿಐಟಿಯು ಮುಖಂಡ ಗಿರಿಯಪ್ಪ ಪೂಜಾರಿ ಹೇಳಿದರು.</p>.<p>ಪಟ್ಟಣದ ಶಾಸಕರ ಕಚೇರಿ ಎದುರು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭ ವಿರೋಧಿಸಿ ಸಿಐಟಿಯು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿರು.</p>.<p>ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿಸುವಂತೆ ಅಧಿವೇಶನದಲ್ಲಿ ಮಹಿಳೆಯರ ಪರ ಧ್ವನಿಯಾಗುವಂತೆ ಶಾಸಕಿ ಕರೆಮ್ಮ ಜಿ.ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.</p>.<p>ರಂಗಮ್ಮ ಅನ್ವರ, ರಮಾದೇವಿ ಮಾತನಾಡಿದರು. ಬಸಲಿಂಗಮ್ಮ, ಚಂದ್ರಕಲಾ, ಲೀಲಾವತಿ, ಶಕೀಲಾ, ಹನುಮಂತಿ, ಸುಜಾತಾ ನಾಯಕ, ರೇಣುಕಾ ಬೊಮ್ಮನಾಳರ್, ಖುಷಿದ ಬೇಗಂ ಕರಿಗುಡ್ಡ, ರಂಗಮ್ಮ, ಸುರೇಖಾ, ರಾಧಿಕಾ, ಜಯಲಕ್ಷ್ಮಿ, ಕೌಸರ್ ಬೇಗಂ, ಪಾಪಮ್ಮ ನಿಲೋಗಲ್, ಗೋದಾವರಿ, ಹೈದರಬಿ ಜಾಲಹಳ್ಳಿ, ಮಹಾಲಕ್ಷ್ಮಿ ಭಾಗವಹಿಸಿದ್ದರು.</p>.<p>ನೂತನ ಎಲ್ಕೆಜಿ ಮತ್ತು ಯುಕೆಜಿಯಿಂದ ಅಂಗನವಾಡಿ ಕೇಂದ್ರಗಳು ದುರ್ಬಲಗೊಳ್ಳಲಿವೆ. ವೈಜ್ಞಾನಿಕವಾಗಿ ಪ್ರಾರಂಭಿಸುವಂತೆ ಸದನದಲ್ಲಿ ಪ್ರಸ್ತಾಪಿಸುವೆ.</p>.<p>ಕರೆಮ್ಮ ಜಿ.ನಾಯಕ, ಶಾಸಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>