ಮಳೆ ಕೊರತೆಯಿಂದ ಹತ್ತಿ, ತೊಗರಿ, ಮೆಣಸಿನಕಾಯಿ ಮತ್ತು ಜೋಳ ಸೇರಿದಂತೆ ಬಹುತೇಕ ಬೆಳೆಗಳು ನಿರೀಕ್ಷಿತ ಬೆಳವಣಿಗೆಯಾಗಿಲ್ಲ ಮತ್ತು ಹೆಚ್ಚಾಗಿ ಕಾಡುತ್ತಿರುವ ರೋಗಭಾಧೆಯಿಂದ ಬೆಳೆ ರಕ್ಷಣೆಗೆ ರೈತರು ಕಷ್ಟಪಡುತ್ತಿದ್ದಾರೆ. ಇದೀಗ ಹಿಂಡು ಹಿಂಡಾಗಿ ಜಮೀನುಗಳಿಗೆ ದಾಳಿ ಇಡುತ್ತಿರುವ ಕಾಡಮ್ಮೆ ಹಾಗೂ ಹಂದಿ ಹಿಂಡುಗಳು ಬೆಳೆಗಳನ್ನು ತುಳಿದು, ತಿಂದು ಹಾಳು ಮಾಡುತ್ತಿದ್ದು ರೈತರ ನಿದ್ದೆಗೆಡಿಸಿವೆ.